ಹುಬ್ಬಳ್ಳಿ: ನಗರದಲ್ಲಿ ಬಕ್ರೀದ್ ಹಬ್ಬದ ಸಿದ್ಧತೆ ಬರದಿಂದ ಸಾಗಿದೆ. ಪ್ರಾರ್ಥನೆ ಸಲ್ಲಿಸುವ ಮೈದಾನದ ಸ್ವಚ್ಛತೆ ಹಾಗೂ ಮುಸ್ಲಿಂ ಯುವಕರು ಮತ್ತು ಸ್ವಯಂಸೇವಕರು ಮಸೀದಿ ದರ್ಗಾಗಳನ್ನು ವಿದ್ಯುತ್ ದ್ವೀಪಗಳಿಂದ ಅಲಂಕರಿಸುವಲ್ಲಿ ನಿರತರಾಗಿದ್ದಾರೆ.
ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನ, ಇಂಡಿ ಪಂಪ್ ವೃತ್ತ, ಗಣೇಶ್ ಪೇಟೆ ಸರ್ಕಲ್, ಇನ್ನು ಹಲವಾರು ತಳದಲ್ಲಿ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಪ್ರಾರ್ಥನೆ ಸಲ್ಲಿಸುವ ಮೈದಾನದ ಸುತ್ತಲಿನ ಗುಂಡಿ ಅಗೆದ ರಸ್ತೆಗಳು ಪಾಲಿಕೆ ಸಿಬ್ಬಂದಿ ತಾತ್ಕಾಲಿಕವಾಗಿ ಮಾಡಲು ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳು ಮುಖಂಡರು ಜೊತೆಗೆ ಸಭೆ ನಡೆಸಿದ್ದಾರೆ.
