ಕರ್ನಾಟಕ – ಗೋವಾ, ಎರಡು ರಾಜ್ಯಗಳ ನಡುವೆ ಮುಖ್ಯವಾದ ರಸ್ತೆಗೆ ಜೀವ ಇಲ್ಲದ ಕಾರಣ ಲಾರಿ ಮಾಲೀಕರಿಗೆ ಆಗುವಂತಹ ನಷ್ಟ ಎಷ್ಟು?
ಲಾರಿ ಅಸೋಸಿಯೇಷನ್ ಹಾಗೂ ಲಾರಿ ಮಾಲೀಕರು ವಿರೋಧಪಡಿಸುತ್ತಿರುವುದು ಸರ್ಕಾರದ್ ಗಮನಕ್ಕೆ ಬರುತ್ತಿಲ್ಲವಾ? ಹಾಗಾದರೆ ಈಗ ರಸ್ತೆ ಮರು ನಿರ್ಮಾಣ ಕೆಲಸಕ್ಕೆ ಕೈ ಹಾಕುವವರು ಯಾರು?
ಈ ಸಮಯದಲ್ಲಿ ಕರ್ನಾಟಕ ಲಾರಿ ಅಸೋಸಿಯೇಷನ್ ವಾಯ್ಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮಲ್ನಾಡ್ ಅವರು ತನ್ನ ಅಸೋಸಿಯೇಷನ್ ಅವರ ಜೊತೆ ರಸ್ತೆ ಮರು ನಿರ್ಮಾಣವಾಗದಿದ್ದಲ್ಲಿ ಆಗುವಂತಹ ನಷ್ಟದ ಬಗ್ಗೆ ಚಿಂತೆ ನಡೆಸಲಿದ್ದಾರೆ ಹಾಗೆ ಎರಡು ರಾಜ್ಯಗಳ ನಡುವೆ ಇರುವಂತಹ ರಾಮನಗರ ರಸ್ತೆಯಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಈ ಸಮಯದಲ್ಲಿ ನ್ಯಾಷನಲ್ ಹೈವೇ ಅಥಾರಿಟಿ ಆಫೀಸರ್ ಶ್ರೀ ಕಿಶೋರ್, ಫಾರೆಸ್ಟ್ ಆಫೀಸರ್ ಸಂತೋಷ್ ಹಿರೇಮಠ್, ಪೊಲೀಸ್ ಅಧಿಕಾರಿ ಶ್ರೀ ಕೃಷ್ಣಕಾಂತ್ ಪಾಟೀಲ್ ರಸ್ತೆ ಮತ್ತು ಸೇತುವೆ ಸಮಸ್ಯೆಗಾಗಿ ಹುಬ್ಬಳ್ಳಿ ಸಂಘದ ಅಧ್ಯಕ್ಷ ಶ್ರೀ ಗಿರೀಶ್ ಮಲ್ನಾಡ್ ಅವರು, ಬೆಳಗಾವಿ ಸಂಘದ ಅಧ್ಯಕ್ಷ ಶ್ರೀ ನಾಮದೇವ್ ಚೌಹಾನ್, ಖಾನಾಪುರ ಶ್ರೀ ವಿಜಯ ಸಾಳುನ್ಕೆ, ಗೋವಾ ಅಧ್ಯಕ್ಷ ಶ್ರೀ ಕಾಂತಚಾರಿ, ಮತ್ತು ಲಾರಿ ಮಾಲೀಕರು, ಇತರ ಮುಖಂಡರು ಉಪಸ್ಥಿರಿದ್ದು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
