ಹುಬ್ಬಳ್ಳಿ: ವಿಶೇಷತೆ ಅಂದರೆ ಹೆಣ್ಣುಮಕ್ಕಳಿಗೆ ಆಟೋ, ಕಾರ ಹಾಗೂ ಲಾರಿ ಚಾಲನೆ ಮಾಡಲು ಹಾಗೂ ಉದ್ಯೋಗ ಸೃಷ್ಟಿ ಮಾಡುವದಾಗಿ ಭರವಸೆ ನೀಡಿದರು. ಶ್ರೀಮತಿ ಸ್ಮಿತಾ ಮಲೆನಾಡು ಅವರಿಗೆ ಇದರ ಜವಾಬ್ದಾರಿ ನೀಡುವುದಾಗಿ ಹೇಳಿದ್ದಾರೆ.
ರಾಜ್ಯ ಲೋರಿ ಮಾಲಕರ ಸಂಘದ ಅಧ್ಯಕ್ಷ ಶ್ರೀ ಜಿ.ಆರ್.ಷಣ್ಮುಗಪ್ಪ ಅವರು ಇಂದು ಹುಬ್ಬಳ್ಳಿಗೆ ಆಗಮಿಸಿ ಲೋರಿ ಮಾಲಕರಿಗೇ, ಚಾಲಕರಿಗೆ ಬೇಟಿ ಮಾಡಿ ಅವರ ಸಮಸ್ಯೆ ಹಾಗೂ ಬೇಡಿಕೆ ಗಳನ್ನು ಕೇಳಿ ಬಗೆ ಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಮಯದಲ್ಲಿ ಕರ್ನಾಟಕ ಲಾರಿ ಸಂಘದ ಉಪಾಧ್ಯಕ್ಷ ರಾದ ಶ್ರೀ ಗಿರೀಶ್ ಮಲೆನಾಡು ಅವರು ತಮ್ಮ ಕಚೇರಿಗೆ ಬರ್ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಲಾರಿ ಚಾಲಕರ ಮತ್ತು ಮಾಲಕರ ಸುರಕ್ಷತೆ ಹಾಗೂ ರೋಡಿನಲ್ಲಿ ಆಗುವ ಅನಾಹುತ – ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್ಕಾರ ದಿಂದಾ ಎಲ್ಲಾ ಸೌಲಭ್ಯ ಒದಗಿಸ ಬೇಕು ಎಂದು ಕೇಳಿಕೊಂಡಿದ್ದಾರೆ.
ಲಾರಿ ಲೋನ್, ಲೈಸೆನ್ಸ್ ರಿನಿವಲ್ ಹಾಗೂ ಇನ್ನಿತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ.
ದಿನಾಂಕ 14/4/2025 ಮದ್ಯ ರಾತ್ರಿ ಇಂದ ಕರ್ನಾಟಕ ಲಾರಿ ಸಾಗಾಣಿಕೆದಾರರ ಅನಿರ್ದಿಷ್ಟ ಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಡೀಸೆಲ್ ದರವನ್ನು ಕಡಿಮೆ ಮಾಡಲು, ಹೆದ್ದಾರಿ ಟೋಲ್ ಪ್ಲಾಜಾ ರದ್ದುಗೊಳಿಸುವುದು, ಆರ್ ಟಿ ಓ ಚೆಕ್ ಪೋಸ್ಟ್ ರದ್ದುಗೊಳಿಸುವುದು, ಎಫ್ ಸಿ ಶುಲ್ಕ ರದ್ದುಗೊಳಿಸುವುದು ಹಾಗೂ ಸಾರಿಗೆ ವಾಹನಗಳ ನಗರ ಪ್ರವೇಶ ಮುಕ್ತ ಗೊಳಿಸುವುದು ಇವರ ಬೇಡಿಕೆಯಾಗಿದೆ. ಕರ್ನಾಟಕದ ಎಲ್ಲ ಲಾರಿ ಮಾಲಕರಿಗೆ ಹಾಗೂ ಚಾಲಕರಿಗೆ ಈ ಸಂದೇಶವನ್ನು ರವಾನಿಸಲಾಗಿದೆ. ಎಲ್ಲರೂ ಜೊತೆಗೂಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
